ಕಾರವಾರ: ಕುಮಟಾ ವೃತ್ತ ನಿರೀಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಶಿವಪ್ರಕಾಶ ನಾಯ್ಕ ಸೇರಿದಂತೆ ರಾಜ್ಯದ 25 ಮಂದಿ ಸರ್ಕಲ್ ಇನ್ಸ್ಪೆಕ್ಟರ್ಗಳನ್ನು ಡಿ.ವೈ.ಎಸ್ಪಿ ಹುದ್ದೆಗೆ ಪದೋನ್ನತಿಗೊಳಿಸಿ, ಸರ್ಕಾರ ಆದೇಶ ಹೊರಡಿಸಿದೆ.
ಕುಮಟಾ ಸಿ.ಪಿ.ಐ ಶಿವಪ್ರಕಾಶ ಜೊತೆ ಈ ಹಿಂದೆ ಹೊನ್ನಾವರದಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಚೆಲುವರಾಜು ಬಿ. ಅವರೂ ಸಹ ಪದೋನ್ನತಿ ಹೊಂದಿದ್ದಾರೆ.